ಕುಮಾರ್ ಬ್ರದರ್ಸ್ ಸಿನಿಮಾ ಲಾಂಛನದಲ್ಲಿ ಡಿ.ರತ್ನ ಕುಮಾರ್, ನಿರ್ಮಿಸುತ್ತಿರುವ ಅದ್ದೂರಿ ವೆಚ್ಚದಲ್ಲಿ ಹಚ್.ವಾಸು ನಿರ್ದೇಶನ ವಿರಾಟ್ ಚಿತ್ರಕ್ಕೆ ಬಾಬಾ ಬುಡನ್ಗಿರಿ ಬಳಿ ಮಾಣಿಕ್ಯಧಾರಾದಲ್ಲಿ ಸುಮಾರು ೫೦ ಲಕ್ಷ ರೂಪಾಯಿ ವೆಚ್ಚದಲ್ಲಿ ಗಾಜಿನ ಮನೆಯ ಸೆಟ್ನಲ್ಲಿ ಮುಖ್ಯಮಂತ್ರಿ ಸುಹಾಸಿನಿ ಇರುವ ವಿಷಯ ತಿಳಿದು ರವಿಶಂಕರ್ ತನ್ನ ಗ್ಯಾಂಗ್ನವರೊಂದಿಗೆ ಹೆಲಿಕ್ಯಾಪ್ಟರ್ನಲ್ಲಿ ಬಂದು ಅವರನ್ನು ಫಿನಿಷ್ ಮಾಡುವಂತೆ ಸೂಚನೆ ಕೊಡುತ್ತಾನೆ. ಅದೇ ಸಮಯಕ್ಕೆ ಸರಿಯಾಗಿ ೪ ಚಕ್ರದ ಬೈಕ್ನಲ್ಲಿ ಬಂದ ವಿರಾಟ್ ಅವರನ್ನು ಸದೆಬಡಿದು ಮುಖ್ಯಮಂತ್ರಿಯನ್ನು ಪಾರು ಮಾಡಿದ ದೃಶ್ಯ ಚಿತ್ರೀಕರಣವಾಯಿತು. ಚಿತ್ರದ ಕಥೆ ಸಂಭಾಷಣೆ- ಎಂ.ಎಸ್. ರಮೇಶ್, ಛಾಯಾಗ್ರಹಣ - ಎ.ವಿ.ಕೃಷ್ಣಕುಮಾರ್, ಸಂಗೀತ - ವಿ. ಹರಿಕೃಷ್ಣ, ಸಂಕಲನ - ಕೆ.ಎಂ. ಪ್ರಕಾಶ್, ಸಾಹಸ - ರವಿವರ್ಮ, ಕಲೆ- ಈಶ್ವರಿ ಕುಮಾರ್, ನೃತ್ಯ - ಹರ್ಷ, ರಾಮು, ಸಹ ನಿರ್ದೇಶನ- ಎಂ.ಹೆಚ್. ಲಿಂಗರಾಜು, ನಿರ್ವಹಣೆ - ಎನ್.ಎ. ಸುಂದರ್ ರಾಜ್, ಗಗನ ಮೂರ್ತಿ, ತಾರಾಗಣದಲ್ಲಿ - ದರ್ಶನ್, ಚೈತ್ರ ಚಂದ್ರನಾಥ್, ಇಷಾ ಚಾವ್ಲಾ, ವಿಧಿಶಾ ಶ್ರೀವಾತ್ಸವ್, ಶಶಿಕುಮಾರ್, ಸುಹಾಸಿನಿ, ರಂಗಾಯಣ ರಘು, ರವಿಶಂಕರ್, ಶರಣ್, ಬುಲೆಟ್ ಪ್ರಕಾಶ್, ಪ್ರಿಯಂತ್ ಹೈದರಾಬಾದ್, ಸುಮಲತಾ ಅಂಬರೀಶ್, ಪದ್ಮಾವಾಸಂತ, ತುಳಸಿ ಶಿವಮಣಿ, ಚಿತ್ರಾ ಶಣೈ, ರಾಮಮೂರ್ತಿ ಮುಂತಾದವರಿದ್ದಾರೆ.